Friday, March 24, 2023
Google search engine
HomeUncategorizedಬಜೆಟ್ ಮೇಲಿನ ಚರ್ಚೆಗೆ ಇಂದು ಸಿಎಂ ಬೊಮ್ಮಾಯಿ ಉತ್ತರ: ಅಮಿತ್ ಶಾ ರ್ಯಾಲಿಗೆ ಗೈರು

ಬಜೆಟ್ ಮೇಲಿನ ಚರ್ಚೆಗೆ ಇಂದು ಸಿಎಂ ಬೊಮ್ಮಾಯಿ ಉತ್ತರ: ಅಮಿತ್ ಶಾ ರ್ಯಾಲಿಗೆ ಗೈರು

ಬಜೆಟ್ ಮೇಲಿನ ಚರ್ಚೆಗೆ ಇಂದು ಸಿಎಂ ಬೊಮ್ಮಾಯಿ ಉತ್ತರ: ಅಮಿತ್ ಶಾ ರ್ಯಾಲಿಗೆ ಗೈರು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ವಿಧಾನಸಭೆಯಲ್ಲಿ ಅವರು ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಲಿರುವ ಪಕ್ಷದ ಸಮಾವೇಶಕ್ಕೆ ಸಿಎಂ ಗೈರು ಹಾಜರಾಗಲಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಬಗ್ಗೆ ಕಳೆದ ವಾರ ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಿತ್ತು. ಸಿಎಂ ಬಳ್ಳಾರಿ ಪ್ರವಾಸ ನಿಗದಿಯಾಗಿರಲಿಲ್ಲ. ಅಮಿತ್ ಶಾ ಅವರು ಸಂಡೂರು ಸಮಾವೇಶ ಮುಗಿಸಿ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ ಸಿಎಂ ಬೊಮ್ಮಾಯಿ ಅವರೇ ಅಮಿತ್ ಶಾ ಅವರನ್ನು ಬರಮಾಡಿಕೊಳ್ಳಲಿದ್ದಾರೆ. ನಂತರ ಪಕ್ಷದ ಪ್ರಮುಖರ ಸಭೆಯಲ್ಲಿ ಭಾಗವಹಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments