Sunday, March 26, 2023
Google search engine
HomeUncategorizedನನ್ನ ಬಗ್ಗೆ ಮಾತಾಡುವ ಯಾವುದೇ ಹಕ್ಕು ಬಿ.ಸಿ. ಪಾಟೀಲ್ ಗೆ ಇಲ್ಲ: ಸಚಿವ ನಾರಾಯಣಗೌಡ ಕೆಂಡಾಮಂಡಲ

ನನ್ನ ಬಗ್ಗೆ ಮಾತಾಡುವ ಯಾವುದೇ ಹಕ್ಕು ಬಿ.ಸಿ. ಪಾಟೀಲ್ ಗೆ ಇಲ್ಲ: ಸಚಿವ ನಾರಾಯಣಗೌಡ ಕೆಂಡಾಮಂಡಲ

ನನ್ನ ಬಗ್ಗೆ ಮಾತಾಡುವ ಯಾವುದೇ ಹಕ್ಕು ಬಿ.ಸಿ. ಪಾಟೀಲ್ ಗೆ ಇಲ್ಲ: ಸಚಿವ ನಾರಾಯಣಗೌಡ ಕೆಂಡಾಮಂಡಲ

ಮಂಡ್ಯ: ನನ್ನ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಬಿ.ಸಿ. ಪಾಟೀಲ್ ಅವರಿಗೆ ಇಲ್ಲ ಎಂದು ಸಚಿವ ಬಿ.ಸಿ. ಪಾಟೀಲ್ ಅವರ ವಿರುದ್ಧ ಸಚಿವ ಕೆ.ಸಿ. ನಾರಾಯಣ ಗೌಡ ಕೆಂಡಾಮಂಡಲರಾಗಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರದ್ದನ್ನು ಅವರು ನೋಡಿಕೊಳ್ಳಲಿ. ನಾನು ಕಾಂಗ್ರೆಸ್ ಸೇರುವ ಬಗ್ಗೆ ಬಿ.ಸಿ. ಪಾಟೀಲ್ ಅವರಿಗೆ ಅರ್ಜಿ ಹಾಕಿದ್ದೇನೆಯೇ? ನನ್ನ ಬಗ್ಗೆ ಏಕೆ ಮಾತನಾಡಬೇಕು ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾರಾಯಣಗೌಡ ಕಾಂಗ್ರೆಸ್ ಸೇರಬಹುದು. ನಾವ್ಯಾರು ಹೋಗುವುದಿಲ್ಲ ಎಂದು ಬಿ.ಸಿ. ಪಾಟೀಲ್ ಹೇಳಿದ್ದರ ಬಗ್ಗೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಮಾತನಾಡಿದ ಸಚಿವ ನಾರಾಯಣ ಗೌಡ, ಕಾಂಗ್ರೆಸ್ ಸೇರುವ ಕುರಿತಾದ ಬಿ.ಸಿ. ಪಾಟೀಲರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನನ್ನ ಬಗ್ಗೆ ಮಾತನಾಡುವ ಯಾವುದೇ ಹಕ್ಕು ಅವರಿಗೆ ಇಲ್ಲ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments