Sunday, March 26, 2023
Google search engine
HomeUncategorizedದೇವ ವೃಕ್ಷ ಅಶ್ವತ್ಥ ಮರದ ಮಹಿಮೆ ತಿಳಿಯಿರಿ

ದೇವ ವೃಕ್ಷ ಅಶ್ವತ್ಥ ಮರದ ಮಹಿಮೆ ತಿಳಿಯಿರಿ

ದೇವ ವೃಕ್ಷ ಅಶ್ವತ್ಥ ಮರದ ಮಹಿಮೆ ತಿಳಿಯಿರಿ

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ ಪಾತ್ರರಾಗಬಹುದು. ಅರಳಿ ಮರಕ್ಕೆ ನಿಯಮಿತವಾಗಿ ದೀಪ ಹಚ್ಚುವುದರಿಂದ ದೇವಾನುದೇವತೆಗಳ ಆಶೀರ್ವಾದ ಸಿಗಲಿದೆ.

ಶ್ರದ್ಧೆಯಿಂದ ಅರಳಿ ಮರಕ್ಕೆ ನಮಸ್ಕರಿಸಿದ್ರೆ ದೇವಾನುದೇವತೆಗಳು ಪ್ರಸನ್ನರಾಗ್ತಾರೆ. ಋಷಿ-ಮುನಿಗಳು ಅರಳಿ ಮರದ ಕೆಳಗೆ ಕುಳಿತು ಜಪ, ಅನುಷ್ಟಾನ ಮಾಡ್ತಾ ಇದ್ದರು.

ಶಾಸ್ತ್ರದಲ್ಲಿ ಅರಳಿ ಮರದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಅಶ್ವತ್ಥ ಮರದ ಕೆಳಗೆ ಶಿವಲಿಂಗವನ್ನು ಸ್ಥಾಪನೆ ಮಾಡಿ ಪೂಜೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ. ಇದ್ರ ಜೊತೆಗೆ ಆರ್ಥಿಕ ಸಮಸ್ಯೆಗೆ ಬಹುಬೇಗ ಪರಿಹಾರ ಸಿಗುತ್ತದೆ.

ಅಶ್ವತ್ಥ ಮರದ ಕೆಳಗೆ ಕುಳಿತು ಹನುಮಾನ್ ಚಾಲೀಸ್ ಓದುವುದು ಲಾಭಕರ.

ನಿಯಮಿತವಾಗಿ ಅಶ್ವತ್ಥ ಮರಕ್ಕೆ ನೀರು ಹಾಕುವುದರಿಂದ ಜೀವನದಲ್ಲಿ ಖುಷಿ ತುಂಬಿರುತ್ತದೆ. ಭೌತಿಕ ಸುಖ ಪ್ರಾಪ್ತಿಯಾಗುತ್ತದೆ. ಹಾಗೆ ಜಾತಕದಲ್ಲಿರುವ ಅಶುಭ ಗ್ರಹಗಳ ಪ್ರಭಾವ ಕಡಿಮೆಯಾಗುತ್ತದೆ.

11 ಅಶ್ವತ್ಥದ ಎಲೆಗಳನ್ನು ತೆಗೆದು ಚಂದನದಲ್ಲಿ ಶ್ರೀರಾಮ ಎಂದು ಬರೆದು ಅದನ್ನು ಮಾಲೆ ಮಾಡಿ ಹನುಮಂತನಿಗೆ ಅರ್ಪಣೆ ಮಾಡುವುದರಿಂದ ಎಲ್ಲ ಸಂಕಷ್ಟಗಳು ದೂರವಾಗುತ್ತವೆ.

ಸಾಡೇ ಸಾಥ್ ಶನಿ ದೋಷವನ್ನು ಅಶ್ವತ್ಥ ಮರ ದೂರ ಮಾಡುತ್ತದೆ. ಪ್ರತಿ ಶನಿವಾರ ಬೆಳಿಗ್ಗೆ ಅರಳಿ ಮರದ ಕೆಳಗೆ ಬೆಲ್ಲ ಹಾಗೂ ಸಕ್ಕರೆ ಮಿಶ್ರಿತ ನೀರನ್ನು ಅರ್ಪಿಸಿ. ಧೂಪ ಹಚ್ಚಿ ಅದ್ರ ಜೊತೆಗೆ ಧ್ಯಾನ ಮಾಡಿ. ಸಂಜೆ ಸಾಸಿವೆ ಎಣ್ಣೆಯ ದೀಪವನ್ನು ಅರಳಿ ಮರದ ಕೆಳಗೆ ಹಚ್ಚಿ.

ದಿನದ 24 ಗಂಟೆ ಆಮ್ಲಜನಕವನ್ನು ಹೊರಬಿಡುವ ಏಕೈಕ ಮರ ಅರಳಿ ಮರ ಎನ್ನಲಾಗಿದೆ. ಇದಕ್ಕೆ ದೇವ ವೃಕ್ಷ ಎಂದೇ ಕರೆಯಲಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments